Posts

Showing posts from March, 2022

ಅಪ್ಪ ಏಕೋ ಹಿಂದೆಯೇ ಉಳಿದು ಬಿಟ್ಟ!!!

Image
ನನ್ನ 'ಅಪ್ಪಾ '!!! ... ನನ್ನ ಸಾಧನೆಯ ಹಾದಿಯಲ್ಲಿ ಪ್ರತಿ ಕ್ಷಣ,ಪ್ರತಿ ನಿಮಿಷ,ಪ್ರತಿ ದಿನ ನನ್ನೊಂದಿಗೆ ನಡೆಯುತ್ತಾ ,ನಡೆಸುತ್ತಾ ಇರುವ ನನ್ನ ಬದುಕು... ನನ್ನ ಪ್ರಪಂಚ ನನ್ನ ಅಪ್ಪ...ನನ್ನ ಪ್ರಕಾರ ನಾನು ನನ್ನ ಅಪ್ಪನ ಪಡಿ ಅಚ್ಚು, ನಗು ಹಾವ-ಭಾವ ಎಲ್ಲವು ಅವರ ಹಾಗೆಯೇ... ನನ್ನ ಪಾಲಿಗೆ ನನ್ನ ಅಪ್ಪ ಒಬ್ಬ ಒಳ್ಳೆಯ ಸ್ನೇಹಿತ, ಅನುಭವಿ ಸಲಹೆಗಾರ. ಒಮ್ಮೊಮ್ಮೆ ಎಳೆಯ ಮಗು, ಮತ್ತೊಮ್ಮೆ ಹುಡುಗಾಟದ ಪೋರ, ಮಗದೊಮ್ಮೆ ಉತ್ಸಾಹಿ ಯುವಕ.  ಅವರು ಕೊಟ್ಟ ಧೈರ್ಯದಿಂದಲೇ ಇಂದು ನಾನು ನಾನಗಿದ್ದೇನೆ ಅನ್ನುವುದೇ ನನ್ನ ಪಾಲಿನ ನಿತ್ಯ ಸತ್ಯ...                                                    ಅಪ್ಪ " ಈ ಶಬ್ದದಲ್ಲೇ ಅದೆಂಥಾ ಗತ್ತು, ಗಾಂಭೀರ್ಯ...... ತಾನು ಎಲ್ಲಾ ಕಡೆ ಇರೊಕೆ ಸಾಧ್ಯವಿಲ್ಲ ಅಂತಾ ಗೊತ್ತಾಗಿ ತಾಯೀನ ಸೃಷ್ಟಿ ಮಾಡಿದ ದೇವ್ರು, ಏಕಕಾಲದಲ್ಲಿ ತನ್ನಿಂದ ಎಲ್ಲರನ್ನು ಸಲಹಲು ಸಾಧ್ಯವಿಲ್ಲ ಎಂದು ತಿಳಿದು ಅಪ್ಪನನ್ನು ಸೃಷ್ಟಿಸಿದ. ಅಪ್ಪ ಅನ್ನೋ ಪದಕ್ಕೆ ಸಾವಿರ ಆನೆಗಳ ಬಲ, ದರ್ಪ. ಕೋಪ ಅತಿ ಎನ್ನಿಸುವ ಶಿಸ್ತು. ಅನುಮಾನ. ಇವೆಲ್ಲದರ ಸಮ್ಮಿಲನವೇ ಅಪ್ಪ. ಅಪ್ಪನ ಬಗ್ಗೆ ಅದೆಂಥದ್ದೋ ಅಮೂರ್ತ ಭಯ. ಹಾಗಂತ ಆತನಲ್ಲಿ ಪ್ರೀತಿ ಇಲ್ಲ ಎಂದುಕೊಂಡರೇ ತಪ್ಪು. ಆತನಲ್ಲಿ ಅತ...

ಅಮ್ಮಾ ಎಂದರೆ ಏನೋ ಹರುಷವೂ.....!!!

Image
ಅಮ್ಮಾ ...!! ಹೊತ್ತು ಹೆತ್ತು ತುತ್ತು  ನೀಡಿದವಳು.ಅಮ್ಮ ಎಂದು ಉಚ್ಚರಿಸಿದ ಕೂಡಲೇ ವಾತ್ಸಲ್ಯದ ಜಗತ್ತೊಂದು ಕಣ್ಣೆದುರು ತೆರೆದುಕೊಳ್ಳುತ್ತದೆ. ಆಕೆಗೆ ಪರ್ಯಾಯವಾದ ಪದವೂ  ಇಲ್ಲ ,ವಸ್ತುವೂ ಇಲ್ಲ, ವ್ಯಕ್ತಿಯೂ ಇಲ್ಲ. ಜಗತ್ತಿನ ಏಕೈಕ ನಿಸ್ವಾರ್ಥಿ. ಅಮ್ಮ ಎಂದರೆ ಪ್ರೀತಿ.ಅಮ್ಮ ಎಂದರೆ ಮಮತೆ. ಅತ್ತು ಕರೆದಾಗಲೆಲ್ಲ ಎತ್ತಿ ಆಡಿಸಿ,ತುತ್ತಿಟ್ಟು ಕಥೆ ಕಟ್ಟಿದವಳು. ತಾಯಿ ಗುರುವಾಗಿ ವಿದ್ಯೆ-ಬುದ್ಧಿ ಕಲಿಸಿದವಳು.ಕಲ್ಲುಮುಳ್ಳಿನ ಮಧ್ಯೆ ಕೈಹಿಡಿದು ನಡೆಸಿದವಳು. ಪುಟ್ಟ ಹೆಜ್ಜೆಗಳು ತಡವರಿಸಿದಾಗ ಅತ್ತವಳು. ಭದ್ರವಾಗಿ ಬದುಕು ನೆಲೆ ಕಂಡಾಗ ಸಂತೃಪ್ತಿಯಿಂದ ಮನದುಂಬಿ ನಕ್ಕವಳು. ಅಡಿಗಡಿಗೆ ಎದುರಾದ ನೋವು ಅಸಹಾಯಕತೆಗಳನ್ನು ನುಂಗುತ್ತಲೇ ಬಂದವಳು. ವಾಸ್ತವದ ಬಿಸಿಯನ್ನು ಒಳಗೊಳಗೆ ಅರಗಿಸಿಕೊಂಡವಳು. ದುಡಿಮೆಯ ಹಾದಿಯಲ್ಲಿ ಬಾಳು ಸವೆಸಿದವಳು. ನಿವೃತ್ತಿಯೇ ಇಲ್ಲದ ಉದ್ಯೋಗದಲ್ಲಿ ಉರಿವ ದೀಪವಾಗಿಯೇ ಬದುಕಿಗೆ ಸರಿದವಳು.  ಭಾವಕ್ಕೊಂದು ಜೀವ ಕೊಟ್ಟು, ಜೀವಕ್ಕೊಂದು ರೂಪ ಇಟ್ಟು ಬದುಕಿಗೊಂದು ಗುರುತು ಕೊಡುವ ಅಮ್ಮ.  ಬದುಕಿನ ವಾಸ್ತವದ ಕಹಿ ಜಂಜಾಟವನ್ನು ಸದಾ ತನ್ನ ವಾತ್ಸಲ್ಯದ ನೆಗೆಯೊಳಗೆ ಅಡಗಿಸಿ ಸುಂದರ ಹಾಗೂ ಸರಳವಾದ ಬಾಲ್ಯವನ್ನು ಕೊಟ್ಟವಳು. ಹೆತ್ತು ಹತ್ತಿರವಾದವಳು. ತುತ್ತನಿತ್ತು ಬಾಳಬುತ್ತಿ ತೋರಿಸಿದವಳು. ಮುತ್ತನಿತ್ತು ಅಣಿಮುತ್ತನ್ನಾಗಿಸಿದವಳು. ಹೆಸರು ಇಟ್ಟ ದಷ್ಟೇ ಅಲ್ಲ. ಇಟ್ಟ ಹೆಸರು ಉಳಿಸಿದವಳು. ಎತ...

ಕನ್ನಡ ಮಾಧ್ಯಮದ ವಿದ್ಯಾರ್ಥಿನಿಯೆಂಬ ಹೆಮ್ಮೆ ಇದೆ!!

ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನದ ಒಂದು ಹಂತವನ್ನು ಮುಗಿಸಿದ ಮೇಲೆ ನೆನಪಿಸಿಕೊಳ್ಳುವ ಸಾಮಾನ್ಯ ವಿಷಯವೆಂದರೆ ಅದು "ಬಾಲ್ಯ". "ನನ್ನ ಬಾಲ್ಯ ಎಷ್ಟು ಚೆನ್ನಾಗಿತ್ತು" ಎಂದು ಹೇಳದ ವ್ಯಕ್ತಿಗಳೇ ಇಲ್ಲಾ ಎನ್ನಬಹುದು. ಯಾವುದೇ ವಿಚಾರದ ಬಗ್ಗೆ ಆಲೋಚನೆ ಇಲ್ಲದೇ, ಆಟವಾಡುತ್ತಾ ಕಳೆದ  ಆ ದಿನಗಳು ಇಂದೂ ನೆನಪು ಮಾತ್ರ. ನಾವು ಜೀವನದಲ್ಲಿ  ಏನೇ    ಸಾಧಿಸಿದರೂ ಬಾಲ್ಯವನ್ನು ಮರೆಯಲು ಸಾಧ್ಯವಿಲ್ಲ.ಬಾಲ್ಯದ ಆ ಮುಗ್ಧತೆ,ನಗು, ಪ್ರಾಮಾಣಿಕತೆ,ಜಾತಿ  ಬೇಧವನ್ನೆ ತಿಳಿಯದ ಮನಸ್ಸು,ಮೊದಲ ಶಾಲಾ ದಿನ,ಮೊದಲ ಬಹುಮನ, ರಜಾ ದಿನಗಳಲ್ಲಿ ಸಂಬಂಧಿಕರ ಮನೆಯಲ್ಲಿ ಆಡಿದ ಆಟ, ಮರ ಹತ್ತಿದ್ದು  ಇಳಿದಿದ್ದು,ಪೆಟ್ಟು ತಿಂದದ್ದು,ಜಗಳವಾಡಿದ್ದೂ, ಬೇರೆಯವರ ತೋಟದಿಂದ ಕದ್ದು ತಿಂದ ಹಣ್ಣುಗಳು,ಹೀಗೆ ಅನೇಕ ನೆನಪುಗಳು ಸ್ಮೃತಿಪಟಲದಲ್ಲಿ ಅಚ್ಚೊತ್ತಿದೆ.ಅಂದು ಕಳೆದ ಕ್ಷಣಗಳು ಇಂದು ನೆನಪಾಗಿ ಮಾತ್ರ ಉಳಿದಿದೆ.ಅಂದು ಕಳೆದ ಆ  ಕ್ಷಣ ಗಳೆಲ್ಲ ನನಗೆ ತುಂಬಾ ಅಮೂಲ್ಯವಾದದ್ದು.ಅದರಲ್ಲೂ ಪ್ರಾಥಮಿಕ ಶಾಲಾ ದಿನಗು ನನ್ನ ಮೇಲೆ ತುಂಬಾ ಪ್ರಭಾವ ಬೀರಿದೆ.              ಜೀವನದ ಪಾಠಗಳನ್ನು ಹೇಳಿಕೊಟ್ಟ ನಿಜವಾದ ದೇಗುಲವದು. ನಾನಂತು ಕನ್ನಡ ಮಾದ್ಯಮದ  ವಿದ್ಯಾರ್ಥಿನಿ. ಇಂಗ್ಲಿಷ್ ಮಾಧ್ಯಮ ದ ವಿದ್ಯಾರ್ಥಿಗಳಿಗಿಂತ ಲೂ ವಿಶೇಷ ಅನುಭವ ಹೊಂದಿದ್ದೇನೆ ಎನ್ನುವ ಕಲ್ಪನೆ ನನ್ನದು. ಶಾಲಾ ದಿನಗಳಲ್ಲ...