Posts

ಪ್ರೀತಿಸುವವರನ್ನು ಕೊಂದುಬಿಡಿ - ಜೋಗಿ

ಪ್ರೀತಿಸುವವರನ್ನು ಕೊಂದುಬಿಡಿ - ಜೋಗಿ ಅರ್ರೇ! ಈ ಕೃತಿಯ ಹೆಸರೇ ವಿಚಿತ್ರವಾಗಿದೆಯಲ್ವಾ ಎಂದು ಈ ಪುಸ್ತಕವನ್ನು ಕೈಗೆತ್ತಿಕೊಂಡಾಗ ನನಗನಿಸಿತು.  ಶೀರ್ಷಿಕೆಯೇ ವಿಚಿತ್ರವಾಗಿದೆ! ಪ್ರೀತಿಸುವವರನ್ನು ಕೊಲ್ಲುವುದು ಎಂದರೇನು? ಸಾಧ್ಯವಾ ಅದು, ಅಷ್ಟು ಪ್ರೀತಿಸಿಕೊಳ್ಳುವುದು‌ ಬದುಕುವುದಕ್ಕಾಗಿ ಅಲ್ಲವಾ? ಸಾಯಿಸಿ ಎನ್ನುತ್ತಿದ್ದಾರಲ್ಲ ಎಂಬ ನಾಲ್ಕೈದು ಪ್ರಶ್ನೆಗಳೊಂದಿಗೆ ಶುರುವಿಟ್ಟೆ..!! ಮುಂದುವರಿದು ಲೇಖಕರ ಮೊದಲ ಮಾತಿನಲ್ಲಿ " ಈ ಪುಸ್ತಕ ಸಾಹಿತ್ಯವನ್ನು ಈಗಾಗಲೇ ಓದಿಕೊಂಡಿರುವ ಪ್ರಾಜ್ಞರಿಗಾಗಿ ಅಲ್ಲ. ಈಗಷ್ಟೇ ಕನ್ನಡ ಕೃತಿಗಳನ್ನು ಓದಲು ಶುರು ಮಾಡಿರುವ ಹದಿಹರೆಯದ ತರುಣ ತರುಣಿಯರಿಗೆ ಆರಂಭಿಸಿರುವ ಮಾಲಿಕೆ ಇದು" ಎಂಬುವುದನ್ನು ಓದಿದಾಗ ಈ ಪುಸ್ತಕ ಓದಲೇಬೇಕೆನ್ನಿಸಿತು.  ಅಂತ್ಯವಿಲ್ಲದ ಕಥೆಗಳು ಈ ಕೃತಿಯ ಪ್ರತಿಯೊಂದು ಅಧ್ಯಾಯದಲ್ಲಿದೆ. ಪ್ರತೀ ಕಥೆಯ ಕೊನೆಗೂ ಹಲವು ಪ್ರಶ್ನೆಗಳನ್ನು ಮುಂದಿಡುವ ಜೋಗಿಯವರು ಅದನ್ನು ಓದುಗನ ವಿವೇಚನೆಗೆ ಬಿಟ್ಟುಬಿಡುತ್ತಾರೆ. ಪ್ರೀತಿಯ ಬಗ್ಗೆ, ಬದುಕಿನ ಅನಿಶ್ಚಿತತೆಯ ಬಗ್ಗೆ ಕಥೆಯ ಜೊತೆಗೆ ಅಲ್ಲಲ್ಲಿ ವ್ಯಾಖ್ಯಾನಗಳನ್ನು ನೀಡುತ್ತಾರೆ. ಇಲ್ಲಿರುವ ವ್ಯಾಖ್ಯಾನಗಳು ಬಹು ಅಮೂಲ್ಯವಾದವುಗಳೂ, ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳಬಹುದಾದಂತವುಗಳೂ ಆಗಿವೆ. ಪ್ರೀತಿಯೆಂದರೆ "ಅವನು, ಅವಳು" ಪ್ರೀತಿಗೆ ಸೀಮಿತವಲ್ಲ. ಬದುಕಿನೆಡೆಗೆ ಇರುವುದೂ ಪ್ರೀತಿಯೇ!  ಒಂದು ಇಪ್ಪತ್ತು ಸಣ್ಣಕಥೆಗಳಿರುವ ೨೦೩ ...

ತಲೆದಂಡ!!!

Image
ತಲೆದಂಡ!!! ಆಧುನಿಕತೆಯ ಹೆಸರಿನಲ್ಲಿ ಕಾಡಿನ ಮಧ್ಯದಲ್ಲಿ ರಸ್ತೆಗಳ ನಿರ್ಮಾಣಕ್ಕೆಂದು ನೂರಾರು ಮರಗಳನ್ನು ಕಡಿದಿರುವ ಉದಾಹರಣೆಳಿವೆ. ಮರ ಕಡಿಯುವುದರಿಂದ ಆಗುವ ಅನಾಹುತಗಳ ಬಗ್ಗೆ ಬೀದಿ ನಾಟಕ, ಸಾಕ್ಷ್ಯಚಿತ್ರಗಳ ಮೂಲಕ ಆಗಾಗ ಅರಿವು ಮೂಡಿಸುತ್ತಲೇ ಇರುತ್ತಾರೆ. ಈ ಬಾರಿ ನಿರ್ದೇಶಕ ಪ್ರವೀಣ್‌ ಕೃಪಾಕರ್‌ ‘ತಲೆ ದಂಡ’ ಸಿನಿಮಾದ ಮೂಲಕ ಮರ, ಗಿಡಗಳು, ಪ್ರಕೃತಿ ಮನುಷ್ಯನ ಜೀವನಕ್ಕೆ ಎಷ್ಟು ಅವಶ್ಯಕ ಮತ್ತು ಅದರ ವಿರುದ್ಧ ನಿರಂತರ ಹೋರಾಟ ಮಾಡುತ್ತಲೇ ಇರಬೇಕು ಎಂಬ ಅಂಶವನ್ನು ಸರಳವಾಗಿ ಹೇಳಿದ್ದಾರೆ. ಪ್ರವೀಣ್‌ ಕೃಪಾಕರ್‌ ಇಂತಹದ್ದೊಂದು ಸೂಕ್ಷ್ಮವಾದ ವಿಷಯವನ್ನು ಹೇಳಲು ಆಯ್ಕೆ ಮಾಡಿಕೊಂಡಿರುವ ಕಥಾ ನಾಯಕ ಬುದ್ಧಿ ಮಾಂದ್ಯ ಎಂಬುದು ವಿಶೇಷ. ಒಂದು ಸರಳ ಕಥೆ ವಯಸ್ಸಾದರೂ ಬುದ್ದಿ ಬೆಳೆಯದೇ ಇರುವವನಿಗೂ ಗಿಡ, ಮರಗಳ ಮಹತ್ವ ಗೊತ್ತು. ಎಲ್ಲವನ್ನು ತಿಳಿದಿರುವ ಬುದ್ಧಿವಂತರಿಗೆ ಅದರ ಅರಿವಿಲ್ಲದೇ ಹೋಗುತ್ತಿರುವುದು ವಿಪರ್ಯಾಸ ಎಂಬುದನ್ನು ಸೂಚ್ಯಕವಾಗಿ ತಿಳಿಸಿದ್ದಾರೆ. ಸೋಲಿಗರ ಹುಡುಗ ಬುದ್ಧಿ ಕಡಿಮೆ ಇರುವ ಕುನ್ನೇ ಗೌಡನಿಗೆ (ಸಂಚಾರಿ ವಿಜಯ್‌) ಕಾಡು, ಗಿಡ, ಮರವೆಂದರೆ ಅಚ್ಚುಮೆಚ್ಚು. ಗಿಡಗಳನ್ನು, ಮರಗಳನ್ನು ಅತಿಯಾಗಿ ಪ್ರೀತಿಸುವ ಈತ, ಊರಿನಲ್ಲಿರುವ ಮರಗಳನ್ನು ಕಡಿದು ರಸ್ತೆ ಮಾಡಲು ಬಂದ ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡಲು ಹೋಗುತ್ತಾನೆ. ಆತನನ್ನು ಪೊಲೀಸರು ಬಂಧಿಸುತ್ತಾರೆ. ಆದರೆ ಆತನ ಮಾನಸಿಕ ಆರೋಗ್ಯ ಸರಿ ಇಲ್ಲದ ಕಾರ...

ADVERTISEMENT REVIEW

The best musical advertisement I have heard , especially for and government organisation.Ever since I heard and watch it the advertisement of Rajasthan tourism. It perhaps on of the most captivating advertisement. The advertisement itself is a piece of an art showcasing everything that Rajasthan. Is famous for and showing things that never imagine existed in Rajasthan. The campaign takes us through three situations of water rage ,a newly married bride slapping her groom, a young college girl whacking a boy and an old aunt beating up a Supermanesque character. In each of these, the point is that one should buy their own bottle of water and not share or "kiss" somebody else's drink. In this ad Amitabh's expression is so natural.This is a heart touching add the expressions the emotion of both the great actor is priceless Kalyan jewellers understands your needs without you saying it. It what has been explain in this ad. In this Times of India is the inspiring video whic...

ಏನಿದು ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟ???

ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟವು ಕ್ರಿ.ಶ.1837 ರಲ್ಲಿ ಬ್ರಿಟಿಷರ ವಿರುದ್ಧ ಕೊಡಗು ಮತ್ತು ದಕ್ಷಿಣ ಕನ್ನಡದ ಅರೆಭಾಷಿಗ ಜನರ ಮುಂದಾಳತ್ವದಿಂದ ನಡೆದ ಸ್ವಾತಂತ್ರ್ಯ ಹೋರಾಟ. ಇದನ್ನು ಕೊಡಗು-ಕೆನರಾ ಬಂಡಾಯ, ಕಲ್ಯಾಣಪ್ಪನ ಕಾಟಕಾಯಿ, ಅಮರ ಸುಳ್ಯದ ರೈತರ ದಂಗೆ ಎಂದೂ ಕರೆಯುತ್ತಾರೆ. ಅಕ್ಟೋಬರ್ 31, 1837 ರಂದು ಭಾರತದ ಸ್ವಾತಂತ್ರ್ಯ ಹೋರಾಟಗಾರ – ಹುತಾತ್ಮ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಮಡಿಕೇರಿ ಕೋಟೆಯ ಆವರಣದಲ್ಲಿ ಬ್ರಿಟಿಷರ ಈಸ್ಟ್ ಇಂಡಿಯಾ ಕಂಪೆನಿಯು ಸಾರ್ವಜನಿಕವಾಗಿ ಗಲ್ಲಿಗೇರಿಸಿಬಿಟ್ಟರು. ಇದರಿಂದಾಗಿ ಭಾರತದ ನಾಗರೀಕತೆ ಒಂದು ವೇಳೆ ತಮ್ಮ ಕುಂದುಕೊರತೆಗಳನ್ನು ಬಹಿರಂಗವಾಗಿ ಧ್ವನಿಸಿದರೆ ಅದರ ಪರಿಣಾಮವನ್ನು ನೆನಪಿಸಿಕೊಳ್ಳುವ ಹಾಗೆ ಮನಸ್ಸಿನಲ್ಲಿ ಭಯವನ್ನು ಉಂಟುಮಾಡಿದರು. 1834ರ ಸುಮಾರಿಗೆ ಅತ್ತ ಕೊಡಗಿನಲ್ಲಿ ಆಡಳಿತ ನಡೆಸುತ್ತಿದ್ದ ಚಿಕ್ಕ ವೀರರಾಜೇಂದ್ರನನ್ನು ಬ್ರಿಟಿಷರು ಪಟ್ಟದಿಂದ ಕೆಳಗಿಳಿಸಿ, ಅಲ್ಲಿನ ಸಾಮ್ರಾಜ್ಯವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು. ಅಲ್ಲದೆ, ಪಂಜ ಸೀಮೆಗೆ ಒಳಪಟ್ಟಿದ್ದ ಪುತ್ತೂರು, ಸುಳ್ಯವನ್ನು ಕೊಡಗಿನಿಂದ ಬೇರ್ಪಡಿಸಿ, ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿಸಿದರು. ಕೊಡಗಿನ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದ ಪ್ರದೇಶವನ್ನು ಬ್ರಿಟಿಷರು ವಿಭಜಿಸಿದ್ದಲ್ಲದೆ, ಹೆಚ್ಚುವರಿಯಾಗಿ ಕಂದಾಯವನ್ನು ಹೇರಿದ್ದು ಜನರನ್ನು ರೊಚ್ಚಿಗೆಬ್ಬಿಸಿತ್ತು. ಇತ್ತ ದಕ್ಷಿಣ ಕನ್ನಡ ಜಿಲ್ಲೆಯ ಮಂಜೇಶ್ವರ, ಕುಂಬಳೆ, ಹ...

ಸರ್ವಾಂಗ ಪ್ರಾವೀಣ್ಯೇ ಈಕೆ!!!

Image
 ಈಕೆ  ಹೇಮಸ್ವಾತಿ ಕುರಿಯಾಜೆ.ಇವರು  ಉದಯಶಂಕರ ಕುರಿಯಾಜೆ ಮತ್ತು ವಸಂತಲಕ್ಷ್ಮಿ ಇವರ ಪ್ರಥಮ ಪುತ್ರಿ. ದೇವಿಕಾ ಕುರಿಯಾಜೆ ಅವರ  ಪ್ರೀತಿಯ ಅಕ್ಕ ಹೇಮಸ್ವಾತಿ!!!! ಮಾತಿನ ಮಲ್ಲಿ, ನಗುವೇ ಅವರ ಅಂದ. ಅವರ ಕೈಯಲ್ಲಿ ಆಗದೇ ಇರುವ ಕಲೆ ಯಾವುದು ಇಲ್ಲ.ಒಂದು ರೀತಿಯಲ್ಲಿ ಸರ್ವಾಂಗ ಪ್ರಾವೀಣ್ಯೇ ಇವರು.... ಇವರು  ಪ್ರಾಥಮಿಕ ಶಿಕ್ಷಣವನ್ನು ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಪಡೆದು, ಪ್ರೌಢಶಿಕ್ಷಣವನ್ನು ಬೆಳ್ಳಾರೆ ಸರಕಾರಿ ಪ್ರೌಢಶಾಲೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಪೂರೈಸಿ, ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪೂರ್ಣಗೊಳಿಸಿದ್ದಾರೆ.ಪ್ರಸ್ತುತ ಅದೇ ವಿದ್ಯಾಸಂಸ್ಥೆಯಲ್ಲಿ ಪ್ರಥಮ ವರ್ಷದ ಬಿ.ಎಸ್ಸಿ ಪದವಿಯನ್ನು ವ್ಯಾಸಂಗ ಮಾಡುತ್ತಿದ್ದಾರೆ.ಜೊತೆಗೆ ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ .   ಎಳೆ ವಯಸ್ಸಿನಲ್ಲೇ ಸಂಗೀತ ಅಭ್ಯಾಸ ಮಾಡಿದ್ದಾರೆ.ಸಂಗೀತದಲ್ಲಿ ಸೀನಿಯರ್ ಪರೀಕ್ಷೆಯನ್ನು ಪೂರೈಸಿದ್ದಾರೆ . ಸುಮಧುರವಾಗಿ ಹಾಡುವ ಇವರು  ಹಲವಾರು ಸ್ಪರ್ಧೆಗಳಿಗೆ ತೆರಳಿ ಪ್ರಶಸ್ತಿಯನ್ನು . ಬಾಚಿಕೊಂಡಿದ್ದಾರೆ. ಕರಾವಳಿಯ ಗಂಡುಕಲೆ ಆದಂತಹ ಯಕ್ಷಗಾನವನ್ನು ವಾಸುದೇವ ರೈ ಇವರ ಬಳಿ ಅಭ್ಯಸಿಸಿ,ಹಲವಾರು ಕಡೆಗಳಲ್ಲಿ ಕಾರ್ಯಕ್ರಮವನ್ನು ನೀಡಿದ್ದಾರೆ. ಪ್...

ಅಕ್ಕನ ಪ್ರೀತಿ!!!!

Image
         ಅಕ್ಕನ ಪ್ರೀತಿ!!!!                           ಅಮ್ಮ ಎನ್ನುವ ಜೀವವೆಷ್ಟು ಆತ್ಮೀಯವೋ ಅಮ್ಮ ಎಂಬ ಪದ ಕೂಡ ಅಷ್ಟೇ ಪವಿತ್ರ. ಹಾಗೆಯೇ ಅಮ್ಮನಂತೆ ತೀರಾ ಹತ್ತಿರದ ಇನ್ನೊಂದು ಸಂಬಂಧವಿದೆ, ಅವಳೇ   ಅಕ್ಕನೆಂಬ ಅಮ್ಮ . ಅಮ್ಮ ತನ್ನ ಮಕ್ಕಳನ್ನೆಷ್ಟು ಪ್ರೀತಿಸುತ್ತಾಳೋ ಅಕ್ಕನೂ ತನ್ನ ಒಡಹುಟ್ಟಿದವರಿಗೆ ಕಾಳಜಿಯನ್ನು ತೋರಿಸುತ್ತಾಳೆ.ಅಮ್ಮನಂತೆ ಕುಟುಂಬದ ಜವಾಬ್ದಾರಿಗಳನ್ನು ಹೊರಬಯಸುತ್ತಾಳೆ. ಹೊಣೆಗಾರಿಕೆಯ ಅನುಭವಗಳಿಲ್ಲದಿದ್ದರೂ ತಾನು ಹಿರಿಯಳೆಂಬ ಭಾವ ತನ್ನಿಂದತಾನೆ ಮೂಡಿ ಅಮ್ಮನ ಹೆಗಲಿಗೆ ಹೆಗಲು ನೀಡುವಳು. ಅದಿಕ್ಕೇನೆ ಅವಳು ಇನ್ನೊಂದು ಅಮ್ಮನೆಂದು ಕರೆಯಿಸಿಕೊಳ್ಳುತ್ತಾಳೆ."ಅಕ್ಕನ ಸ್ಥಾನ - ಮಹತ್ವ"ಕೆಲವು ಕುಟುಂಬಗಳಲ್ಲಿ ಕಾಣುವುದೇನೆಂದರೆ ಹೆತ್ತವರಿಗಿಂತ ಅಕ್ಕನೆಂಬ ಜೀವಿ ಆತ್ಮೀಯಳು. ಒಡಹುಟ್ಟಿದವರಿಗೆ ಆಪತ್ಬಾಂಧವಳು. ಹೆತ್ತವರೊಡನೆ ಹೇಳಿಕೊಳ್ಳಲಾಗದ್ದನ್ನು ಅಕ್ಕನನ್ನು ಪುಸಲಾಯಿಸಿ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುವುದಿದೆ. ಅಲ್ಲಿ ಅವಳ ಜೊತೆ ಭಯವಿಲ್ಲ, ಮನ ಬಿಚ್ಚಿ ಮಾತನಾಡಬಹುದು, ಚೇಷ್ಠೆಗೆ ಅವಕಾಶವಿದೆ. ಹೀಗೆ ಅಕ್ಕನು ಉನ್ನತ ಸ್ಥಾನದಲ್ಲಿದ್ದಾಳೆಂದು ನನ್ನ ನಂಬಿಕೆ.               ಇನ್ನೂ " ಅಕ್ಕ ತಂಗಿಯ ಅನುಬಂಧ" ನನ್ನ...

ಅಪ್ಪ ಏಕೋ ಹಿಂದೆಯೇ ಉಳಿದು ಬಿಟ್ಟ!!!

Image
ನನ್ನ 'ಅಪ್ಪಾ '!!! ... ನನ್ನ ಸಾಧನೆಯ ಹಾದಿಯಲ್ಲಿ ಪ್ರತಿ ಕ್ಷಣ,ಪ್ರತಿ ನಿಮಿಷ,ಪ್ರತಿ ದಿನ ನನ್ನೊಂದಿಗೆ ನಡೆಯುತ್ತಾ ,ನಡೆಸುತ್ತಾ ಇರುವ ನನ್ನ ಬದುಕು... ನನ್ನ ಪ್ರಪಂಚ ನನ್ನ ಅಪ್ಪ...ನನ್ನ ಪ್ರಕಾರ ನಾನು ನನ್ನ ಅಪ್ಪನ ಪಡಿ ಅಚ್ಚು, ನಗು ಹಾವ-ಭಾವ ಎಲ್ಲವು ಅವರ ಹಾಗೆಯೇ... ನನ್ನ ಪಾಲಿಗೆ ನನ್ನ ಅಪ್ಪ ಒಬ್ಬ ಒಳ್ಳೆಯ ಸ್ನೇಹಿತ, ಅನುಭವಿ ಸಲಹೆಗಾರ. ಒಮ್ಮೊಮ್ಮೆ ಎಳೆಯ ಮಗು, ಮತ್ತೊಮ್ಮೆ ಹುಡುಗಾಟದ ಪೋರ, ಮಗದೊಮ್ಮೆ ಉತ್ಸಾಹಿ ಯುವಕ.  ಅವರು ಕೊಟ್ಟ ಧೈರ್ಯದಿಂದಲೇ ಇಂದು ನಾನು ನಾನಗಿದ್ದೇನೆ ಅನ್ನುವುದೇ ನನ್ನ ಪಾಲಿನ ನಿತ್ಯ ಸತ್ಯ...                                                    ಅಪ್ಪ " ಈ ಶಬ್ದದಲ್ಲೇ ಅದೆಂಥಾ ಗತ್ತು, ಗಾಂಭೀರ್ಯ...... ತಾನು ಎಲ್ಲಾ ಕಡೆ ಇರೊಕೆ ಸಾಧ್ಯವಿಲ್ಲ ಅಂತಾ ಗೊತ್ತಾಗಿ ತಾಯೀನ ಸೃಷ್ಟಿ ಮಾಡಿದ ದೇವ್ರು, ಏಕಕಾಲದಲ್ಲಿ ತನ್ನಿಂದ ಎಲ್ಲರನ್ನು ಸಲಹಲು ಸಾಧ್ಯವಿಲ್ಲ ಎಂದು ತಿಳಿದು ಅಪ್ಪನನ್ನು ಸೃಷ್ಟಿಸಿದ. ಅಪ್ಪ ಅನ್ನೋ ಪದಕ್ಕೆ ಸಾವಿರ ಆನೆಗಳ ಬಲ, ದರ್ಪ. ಕೋಪ ಅತಿ ಎನ್ನಿಸುವ ಶಿಸ್ತು. ಅನುಮಾನ. ಇವೆಲ್ಲದರ ಸಮ್ಮಿಲನವೇ ಅಪ್ಪ. ಅಪ್ಪನ ಬಗ್ಗೆ ಅದೆಂಥದ್ದೋ ಅಮೂರ್ತ ಭಯ. ಹಾಗಂತ ಆತನಲ್ಲಿ ಪ್ರೀತಿ ಇಲ್ಲ ಎಂದುಕೊಂಡರೇ ತಪ್ಪು. ಆತನಲ್ಲಿ ಅತ...